Thursday, August 25, 2011

ವಾಸ - ವೆತ್ಯಾಸ

ವಾಸಸ್ಥಾನದಲ್ಲಿ ವೆತ್ಯಾಸ
ದಿನಾಂಕ ೦೬.೦೮.೨೦೧೧ ರಂದು ಸುಮಾರು ೧೧ ರಿಂದ ೧೨ ಘಂಟೆಗಳೊಳಗೆ ರಮೇಶ್, ಷಣ್ಮುಖ್ ಮತ್ತು ಪ್ರಸಾದ್ ರವರುಗಳು ಹಿಂದಿನ ದಿನ ಸಂಪರ್ಕಿಸಿದ್ದ ಲಾಡ್ಜ್ ನ ಸಿಂಬ್ಬಂಧಿಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರು. ಈ ಹಿಂದೆ ನಾವು ಲಾಡ್ಜ್ ನವರಲ್ಲಿ ಕೇಳಿದ್ದು ೧೧ ಕೊಠಡಿ ಅದಕ್ಕಾಗಿ ಅವರು ಕೇಳಿದ್ದು ಶೇ.೭೫ ರಷ್ಟು ಮುಂಗಡ ಹಣ. ನಾವು ಅದಕ್ಕೆ ಕೊಟ್ಟಿದ್ದ ಉತ್ತರ ನಾವುಗಳು ಶೇ.೫೦ ರಷ್ಟು ಹಣವನ್ನು ಮುಂಗಡ ಹಣವನ್ನಾಗಿ ನೀಡಲು ಸಿದ್ಧ ಎಂದು. ಆದರೆ ಇಂದು ಅವರು ಹೇಳಿದ್ದು "ನಾವು ೧೧ ಕೊಠಡಿಗಳನ್ನು ನಿಮಗೆ ಬುಕ್ ಮಾಡಲು ಸಾಧ್ಯವಿಲ್ಲ. ನಾವು ಕೇವಲ ೫ / ೬ ಕೊಠಡಿಗಳನ್ನು ನಿಮಗೆ ನೀಡಬಹುದು" ಎಂದು. ಇದರಿಂದ ನಾವುಗಳು ಅವರ ಜೊತೆ ವ್ಯವಹಾರ ಮುಂದುವರಿಸದೆ ಅಲ್ಲಿಗೇ ಮುಕ್ತಾಯ ಮಾಡಿದೆವು. ನಂತರ ಷಣ್ಮುಖ್ ಕಾಚಿಗುಡ ರೈಲ್ವೇ ನಿಲ್ದಾಣದ ಸಮೀಪದಲ್ಲೇ ಇರುವ ಮತ್ತೊಂದು ಲಾಡ್ಜ್ ಆದ "ನಂದ್ ಇಂಟರ್ನ್ಯಾಷನಲ್" ಕುರಿತು ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹ ಮಾಡಿ, ಅದರ ಕುರಿತು ರಮೇಶ್, ಪ್ರಸಾದ್ ಮತ್ತು ವಿಕಾಸ್ ಜೊತೆ ಚರ್ಚಿಸಿ ಅಲ್ಲಿಯೇ ವಸತಿ ವ್ಯವಸ್ಥೆ ಮಾಡುವ ನಿರ್ಧಾರ ಮಾಡಿದರು. ನಂದ್ ಇಂಟರ್ನ್ಯಾಷನಲ್ ನಲ್ಲಿ ೧೦ ಡಬ್ಬಲ್ ಏರ್ ಕೂಲರ್ ರೂಮ್, ೧ ಸುಪೀರಿಯರ್ ರೂಮ್ (ಗಾಯಕ್ವಾಡ್ ಕುಟುಂಬಕ್ಕೆ) ಮತ್ತು ೧ ಎ.ಸಿ.ರೂಮ್ (ವಿಕಾಸ್ ರವರಿಗಾಗಿ) ಅನ್ನು ಬುಕ್ ಮಾಡುವ ಮತ್ತು ಕೊಡಬೇಕಾಗಿರುವ ಮುಂಗಡ ಹಣದ ಕುರಿತಂತೆ ಅಲ್ಲಿನ ಸಿಬ್ಬಂಧಿ ಪ್ರಿಯಾ ರವರೊಡನೆ ಮಾತುಕತೆ ನಡೆಯಿತು. ಅವರು ನಮ್ಮ ಮೂರು ದಿನದ ವಸತಿ ವ್ಯವಸ್ಥೆಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆಯೇ ಮಾಡಿಕೊಡುವುದಾಗಿಯೂ ಅದಕ್ಕಾಗಿ ನಾವುಗಳು ಯಾವುದೇ ಮುಂಗಡಹಣ ನೀಡಬೇಕಿಲ್ಲವೆಂದೂ ತಿಳಿಸಿದರು. ಆದರೂ ನಾವುಗಳು ಮುಂಗಡವಾಗಿ ಹಣ ನೀಡುವುದು ಸೌಖ್ಯ ಎಂದು ತೀರ್ಮಾನಿಸಿ ಮತ್ತೆ ಪ್ರಿಯ ಅವರನ್ನು ಸಂಪರ್ಕಿಸಿ ಅವರಿಗೆ ನಾವು ಮುಂಗಡವಾಗಿ ನೀಡಬಯಸಿರುವ ಹಣದ ಕುರಿತು ವಿವರಣೆ ನೀಡಿ ಅವರಿಂದ ಅವರ ಬ್ಯಾಂಕಿನ ಖಾತೆ ಸಂಖ್ಯೆ, ಬ್ಯಾಂಕಿನ ಹೆಸರು ಮತ್ತಿತರ ವಿವರವನ್ನು ದಿ.೦೬.೦೮.೨೦೧೧ ರಂದು ಸಂಗ್ರಹಿಸಿ. ಹಣವನ್ನು ಅವರ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆಗೆ ನೇರವಾಗಿ ತುಮಕೂರಿನ ಖಾತೆಯಿಂದಲೇ ಹಣ ತುಂಬುವುದೆಂದು ಮತ್ತು ಅದಕ್ಕಾಗಿ ಮುರಳಿಯವರು ನಮಗೆ ನೀಡುತ್ತೇನೆಂದು ಹೇಳಿದ್ದ ರೂ.೧೦,೦೦೦/- ವನ್ನು ನೇರವಾಗಿ ವಸತಿ ಸೌಕರ್ಯಕ್ಕೆ ಬಳಸಿಕೊಳ್ಳುವುದೆಂದು ತೀರ್ಮಾನಿಸಿ ನಾನು ಮತ್ತು ರಮೇಶ್ ರವರು ದಿ. ೦೭ ಮತ್ತು ೦೮ ರಂದು ಗದಗ್ ನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳಕ್ಕೆ ಹೋಗಬೇಕಾಗಿದ್ದರಿಂದ ಆ ಕಾರ್ಯವನ್ನು ಷಣ್ಮುಖ್ ಮನಃ ಪೂರ್ವಕವಾಗಿ ವಹಿಸಿಕೊಂಡರು. ಸೋಮವಾರ ದಿ.೦೮.೮.೨೦೧೧ ರಂದು ಬೆಳೆಗ್ಗೆ ಸುಮಾರು ೧೦.೩೦ ಕ್ಕೆ ನಾನು ಮತ್ತು ರಮೇಶ್ ಗದಗ್ ನಲ್ಲಿ ಇದ್ದಾಗ ಫೋನ್ ಮಾಡಿದ ಷಣ್ಮುಖ್, ಹೋಟೆಲ್ ನ ಬ್ಯಾಂಕ್ ಖಾತೆಗೆ ನೇರವಾಗಿ ಇಲ್ಲಿಂದಲೇ ಹಣ ತುಂಬುವುದಕ್ಕಿಂತ ಮಲ್ಟಿಸಿಟಿ ಚೆಕ್ ಅನ್ನು ಅವರಿಗೆ ಕೊರಿಯರ್ ಮೂಲಕ ಕಳುಹಿಸುವುದು ಹೆಚ್ಚು ಸೂಕ್ತ ಮತ್ತು ಸುರಕ್ಷಿತ ಎಂದು ನಮಗೆ ಮನವರಿಕೆ ಮಾಡಿಕೊಟ್ಟರು. ಅದಕ್ಕಾಗಿ ಮುರಳಿಯವರು ನಮಗೆ ಕೊಡುತ್ತೇನೆಂದು ಹೇಳಿದ್ದ ಮೊತ್ತದ (ರೂ. ೧೦,೦೦೦/-) ತಮ್ಮ ಆಕ್ಸಿಸ್ ಬ್ಯಾಂಕ್ ಖಾತೆಯ ಚೆಕ್ (ಸಂಖ್ಯೆ: ೦೪೯೪೫೦) ಅನ್ನು "ನಂದ್ ಇಂಟರ್ನ್ಯಾಷನಲ್" ಹೆಸರಿಗೆ ಬರೆದು ಕಳುಹಿಸಿದರು. ದಿ. ೧೦.೦೮.೨೦೧೧ ರಂದು ಪ್ರಿಯಾ ಅವರಿಂದ ನಾವು ಕಳುಹಿಸಿದ ಚೆಕ್ ಅವರಿಗೆ ತಲುಪಿದ ಬಗ್ಗೆ ಮತ್ತು ನಮ್ಮ ವಸತಿ ವ್ಯವಸ್ಥೆ ಖಾಯಂಗೊಂಡಿರುವ ಬಗ್ಗೆ ಫೋನ್ ಮಾಡಿ ತಿಳಿಸುವುದರ ಮೂಲಕ ನಾವು ನೆಮ್ಮದಿಯಿಂದ ನಿದ್ದೆ ಮಾಡುವಂತೆ ಮಾಡಿದರು.

No comments:

Post a Comment