ಮತ್ತೊಂದು ಸಭೆ.
ವಿಮಾನ ಮತ್ತು ರೈಲು ಬುಕ್ ಆದ ನಂತರ ಈ ವಿಷಯವನ್ನು ಎಲ್ಲರಿಗೂ ತಿಳಿಸಿ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚಿಸುವ ಸಲುವಾಗಿ ೫ನೇ ಆಗಸ್ಟ್ ಸಾಯಂಕಾಲ ಐದು ಘಂಟೆಗೆ ಸಭೆಗೆ ಹಾಜರಾಗುವಂತೆ ಪ್ರತಿಯೊಬ್ಬ ಸದಸ್ಯರಲ್ಲೂ ವಿನಂತಿಸಲಾಗಿ ಎಲ್ಲರೂ ಸರಿಯಾದ ಸಮಯಕ್ಕೆ ಸಭೆ ಹಾಜರಾದರು. ಎಲ್ಲರಿಗೂ ಇಲ್ಲಿಯವರೆಗೂ ನಡೆದ ವಿಷಯವನ್ನೆಲ್ಲಾ ತಿಳಿಸಲಾಯಿತು ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ಅವರವರ ವೈಯಕ್ತಿಕ ಸಲಹೆ, ಅಭಿಪ್ರಾಯ ಅಥವಾ ಅನುಮಾನಗಳೇನಿದ್ದರೂ ಚರ್ಚಿಸುವಂತೆ ಸೂಚಿಸಲಾಯಿತು. ಅದರಂತೆ ಕೆಲವರು ವಸತಿ ಸೌಲಭ್ಯದ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಬಯಸಿದರು. ಇದಕ್ಕೆ ಉತ್ತರಿಸಿದ ರಮೇಶ್ ರವರು ಈಗಾಗಲೇ ಕಾಚಿಗುಡ ಸಮೀಪ ಇರುವ ಒಂದು ಲಾಡ್ಜ್ ಅನ್ನು ಸಂಪರ್ಕ ಮಾಡಲಾಗಿದ್ದು ಅವರನ್ನು ಪರಿಶ್ಕೃತ ದರ ಪಟ್ಟಿಗಾಗಿ ಕಾಯುತ್ತಿದ್ದೇವೆ ಅವರಿಂದ ಬರುವ ದರ ಪಟ್ಟಿಯನ್ನು ಎಲ್ಲರ ಅವಗಾಹನೆಗೆ ತಂದು ಒಟ್ಟಾರೆ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡುವುದಾಗಿ ತಿಳಿಸಿದರು ಮತ್ತು ಯಾವುದೇ ವಸತಿ ನಿಲಯವಾದರೂ ಅದನ್ನು ಮುಂಗಡವಾಗಿ ಕಾಯ್ದಿರಸಬೇಕಾಗಿರುವುದರಿಂದ ಮುಂಗಡ ಹಣ ಕೊಡಬೇಕಾಗಿ ಬರುವುದು ಸಹಜ ಪ್ರಕ್ರಿಯೆ ಆದ್ದರಿಂದ ತಿಂಗಳ ವಂತಿಗೆ ಕೊಡದಿರುವ ಮತ್ತು ಹೊಸ ಸದಸ್ಯರುಗಳು ಸ್ವಲ್ಪ ಮಟ್ಟಿನ ಹಣಕಾಸಿನ ಸೌಲಭ್ಯವನ್ನು ಒದಗಿಸಬೇಕೆಂದು ಮನವಿಮಾಡಿಕೊಂಡರು. ಇದಕ್ಕೆ ಮೊದಲು ಸಹಮತ ವ್ಯಕ್ತ ಪಡಿಸಿದ ಷಣ್ಮುಖ್, "ರೈಲು ಬುಂಕಿಂಗ್ ಗಾಗಿ ನನ್ನ ಅಕೌಂಟ್ ನಿಂದ ರೂ.೭,೬೫೦/- ಖರ್ಚಾಗಿದ್ದು, ನೀವು ನನಗೆ ರೂ.೨,೬೫೦/- ಗಳನ್ನು ವಾಪಸ್ ಕೊಡುವ ಮೂಲಕ ನನ್ನಿಂದ ರೂ.೫,೦೦೦/- ಸಂದಾಯವಾದ ರೀತಿಯಲ್ಲಿ ಲೆಕ್ಕ ಪುಸ್ತಕದಲ್ಲಿ ತೋರಿಸಿಕೊಳ್ಳಬಹುದು" ಎಂದರು. ಇದಕ್ಕೆ ನಾನು, ಮಂಜುನಾಥ್, ರಮೇಶ್ ಮತ್ತಿತತರರು ಸಹಮತ ವ್ಯಕ್ತ ಪಡಿಸುವುದರ ಜೊತೆಯಲ್ಲಿ ಅವರ ಸಹಕಾರಕ್ಕೆ ಹರ್ಷ ವ್ಯಕ್ತಪಡಿಸಿದೆವು. ಹೊಸ ಸದಸ್ಯರಲ್ಲಿ ಒಬ್ಬರಾದ ಶೈಲಾ ರವರು ನಾಳೆ ನಾನು ನನ್ನ ಕಡೆಯಿಂದ ರೂ.೪,೦೦೦/- ವನ್ನು ಮತ್ತು ವಿದ್ಯಾರವರು ರೂ.೨,೦೦೦/- ಸಂದಾಯಮಾಡುತ್ತೇನೆಂದು ತಿಳಿಸಿದರು. ಹೆಚ್ಚಿನ ರೀತಿಯಲ್ಲಿ ಪುಳಕಿತರಾದಂತೆ ಕಂಡುಬಂದ ಮುರಳಿಯವರು ನಾನು ರೂ.೧೦,೦೦೦/- ವನ್ನು ಸಂದಾಯ ಮಾಡುತ್ತೇನೆಂದು ತಿಳಿಸಿದರು. ಎಲ್ಲದಿಕ್ಕಿಂತ ಮಿಗಿಲಾಗಿ ನಮ್ಮ ಗಾಯಕ್ವಾಡ್ ರವರೂ ಸಹ ನಾನು ರೂ.೪,೦೦೦/- ವನ್ನು ಸಂದಾಯ ಮಾಡುತ್ತೇನೆ ಎಂದು ತಿಳಿಸಿ ಸಭೆಯಲ್ಲಿ ಹರ್ಷೋಧ್ಗಾರ ಮೂಡಿಸಿ ಸಭೆಯು ಸಂತೋಷದಿಂದ ಭರ್ಕಾಸ್ತುಗೊಳ್ಳುವ ಹಾಗೆ ಮಾಡಿದರು.
No comments:
Post a Comment