ಪ್ರವಾಸಕ್ಕೆ ಹೋರಡುವ ತಯಾರಿಗಳೆಲ್ಲಾ ಭರದಿಂದ ಸಾಗಿದ್ದು. ಷಣ್ಮುಖ್ ಮತ್ತು ರಮೇಶ್ ರವರು ಆದಷ್ಟು ಬೇಗ ಕಾರ್ಖಾನೆಯ ಪೂಜಾವಿಧಿ ವಿಧಾನಗಳನ್ನೆಲ್ಲಾ ಮುಗಿಸಿಕೊಂಡು ಹೊರಟು ಪ್ರಾರ್ಥನಾ ಟ್ರಾವೆಲ್ಸ್ ಗೆ ಹೋಗಿ ನಾವು ಬುಕ್ ಮಾಡಿರುವ ವಾಹನವನ್ನು ತೆಗೆದುಕೊಂಡು ಸುರಭಿ ವಾಟರ್ಸ್ ಕಾರ್ಖಾನೆಗೆ ತೆರಳಿ ನೀರಿನ ಕ್ಯಾನ್ ಗಳನ್ನು ತುಂಬಿಸಿಕೊಂಡು ಸಮೀಪದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪಾರ್ಥಸಾರಥಿಯವರ ಮನೆಯಬಳಿ ತೆರಳಿ ಅಲ್ಲಿರುವ ರಾತ್ರಿ ಊಟದ ಪಾರ್ಸೆಲ್ ಅನ್ನು ತೆಗೆದುಕೊಂಡು ಪಾರ್ಥಸಾರಥಿಯವರ ಜೊತೆ ಗೌರ್ಮೆಂಟ್ ಕಾಲೇಜ್ ಬಳಿ ಹೋಗಿ ಅಲ್ಲಿಂದ ಕೇಶವ್ ಮತ್ತು ಕುಟುಂಬ, ಶಿವರಾಮ್ ಶೆಟ್ಟಿ ಮತ್ತು ಕುಟುಂಬ, ಮುರಳೀಧರ್, ಸುಬ್ರಹ್ಮಣ್ಯ, ಪ್ರಸಾದ್ ಮತ್ತು ಮಂಜುನಾಥ್ ರವರೆಲ್ಲರೊಡನೆ ಹೊರಡುವರು. ನಾನು ಮತ್ತು ಸಹನಾ ಶಿರಾಗೇಟ್ ನಲ್ಲಿ ಪ್ರವಾಸ ತಂಡವನ್ನು ಸೇರಿಕೊಳ್ಳುತ್ತೇವೆ. ಇಲ್ಲಿಂದ ನಮ್ಮ ಪ್ರವಾಸ ಪ್ರಾರಂಭ......
ನಂತರದ ಕುತೂಹಲಕಾರಿ ಘಟಾನವಳಿಗಾಗಿ ಕಾತುರರಾಗಿರಿ.